ಎಲ್ಲರಿಗೂ ನಮಸ್ಕಾರ, ಬೆಳೆ ಪರಿಹಾರಕ್ಕೆ ನೀವು ಅರ್ಜಿ ಸಲ್ಲಿಸಿದ್ದೀರಾ.? ಅರ್ಜಿ ಸಲ್ಲಿಸಿದರು ನಿಮಗೆ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲವೆ..? ಯಾಕೆ ಬೆಳೆ ಪರಿಹಾರ ನಿಮಗೆ ಬಂದಿಲ್ಲ (Bele Parihara Karnataka 2023-24 Not Received) ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ ಓದಿರಿ.
ಬರದಿಂದ ಕಂಗಾಲಾಗಿದ್ದ ಜನರಿಗೆ ಬರ ಪರಿಹಾರವು ಸ್ವಲ್ಪ ಮಟ್ಟಿಗೆ ಆಸರೆಯಾಗಿದೆ. ಬರಗಾಲದಿಂದ ರೈತರ ಬೆಳೆಗಳು ಬಾರದೆ ನಷ್ಟ ಅನುಭವಿಸುವಂತಾಯಿತು. ಇದರಿಂದ ರೈತರಿಗೆ ಬಹಳ ತೊಂದರೆ ಉಂಟಾಯಿತು. ಈ ಸಂದರ್ಭದಲ್ಲಿ ಸರ್ಕಾರವು ಬರ ಪರಿಹಾರವನ್ನು ಘೋಷಣೆ ಮಾಡಿದೆ.
Bele Parihara Karnataka 2023-24 Not Received
ಬರ ಪರಿಹಾರದ ಹಣವನ್ನು ಸರ್ಕಾರವು ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಆದರೂ ಕೆಲ ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಆಗಿಲ್ಲ. ಕಾರಣ ಏನೆಂದರೆ ಅವರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಆಗದಿರುವ, ಆಧಾರ್ ಕಾರ್ಡ್, ಫ್ರೋಸ್ಟ್ ಐಡಿ ಹೆಸರು ವ್ಯತ್ಯಾಸ ಹಾಗೂ ಇತರ ಕಾರಣಗಳಿಂದಾಗಿ ರೈತರಿಗೆ ಪರಿಹಾರ ಸಂದಾಯ ಆಗಿಲ್ಲ.
ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗದೆ ಇದ್ದಲ್ಲಿ ಕೂಡಲೇ ತಾಲೂಕಿನ ತಹಸೀಲ್ದಾರ್ ಅಥವಾ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಈಗಾಗಲೇ ಫ್ರೋಸ್ಟ್ ಐಡಿ ಮೂಲಕ 3.74 ಲಕ್ಷ ರೈತರಿಗೆ 316.52 ಕೋಟಿ ರೂ. ಪರಿಹಾರ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮಿ ಯೋಜನೆಯ DBT Status Check ಮಾಡಿ