ಗೃಹಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣ ಜಮಾ..! | Gruhalakshmi 4th Installment Credited

ಎಲ್ಲರಿಗೂ ನಮಸ್ಕಾರ… ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ (Gruhalakshmi 4th Installment) ನಾಲ್ಕನೇ ಕಂತಿನ ಮಹತ್ವದ ಮಾಹಿತಿ ನಿಮಗಾಗಿ ತರಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ಓದಿ ಮಾಹಿತಿ ಪಡೆಯಬಹುದು.

ನಿಮಗೆಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ಅದರಂತೆ ನಾಲ್ಕು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯುವನಿಧಿ ಯೋಜನೆಯ ಅರ್ಜಿ ಆಹ್ವಾನಿಸಲು ತಯಾರಿ ನಡೆದಿದೆ.

Gruhalakshmi 4th Installment Credited

ಐದು ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಬಹಳ ಪ್ರಭಾವ ಬೀರಿದೆ. ಆಗಸ್ಟ 30 ರಿಂದ ಯೋಜನೆಯನ್ನು ಜಾರಿ ಮಾಡಿ ಮೊದಲ ಕಂತಿ ಹಣ ಜಮಾ ಮಾಡಲಾಯಿತು. ಈಗಾಗಲೇ ಮೂರು ಕಂತುಗಳ ದುಡ್ಡನ್ನು ಅರ್ಹ ಫಲಾನುಭವಿಗಳ ಖಾತೆಗೆ 2,000 ರೂ. ಜಮಾ ಮಾಡಲಾಗಿದೆ.

ಇನ್ನೂ ಗೃಹಲಕ್ಷ್ಮೀ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಜಿಲ್ಲಾವಾರು ವರ್ಗಾವಣೆ ಮಾಡಲಾಗುತ್ತೀದೆ. ಈ ಕೇಳಗಿನ ಜಿಲ್ಲೆಯ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ 2,000 ರೂ. ಯನ್ನು Gruhalakshmi DBT ಮೂಲಕ ಜಮಾ ಮಾಡಲಾಗಿದೆ.

  • ಚಿತ್ರದುರ್ಗ
  • ಬೆಂಗಳೂರು
  • ಕೋಲಾರ
  • ಮಂಡ್ಯ
  • ಬೆಳಗಾವಿ
  • ಬಾಗಲಕೋಟೆ
  • ಧಾರವಾಡ
  • ಹಾಸನ
  • ಬಿಜಾಪುರ
  • ಉತ್ತರ ಕನ್ನಡ
  • ದಾವಣಗೆರೆ
  • ಗದಗ
  • ರಾಯಚೂರು
  • ಕಲಬುರ್ಗಿ
  • ಮೈಸೂರು

ಸರ್ಕಾರ ಕಳೆದು ತಿಂಗಳು ಹೇಳಿದಂತೆ ಪ್ರತಿ ತಿಂಗಳು ದಿನಾಂಕ 20 ರ ಒಳಗಾಗಿ ಗೃಹಲಕ್ಷ್ಮೀ ಯೋಜನೆಯ (Gruhalakshmi 4th Installment Date) ಹಣ ವರ್ಗಾವಣೆ ಮಾಡುವುದಾಗಿದೆ ಹೇಳಿತ್ತು ಅದರಂತೆ ಈ ಹಣ ಜಮಾ ಮಾಡಲಾಗುತ್ತಿದೆ.

ಇನ್ನು ಅನೇಕ ಜನರಿಗೆ ಗೃಹಲಕ್ಷ್ಮೀ ಯೋಜನೆಯ 2,000 ರೂ. ತಾಂತ್ರಿಕ ಕಾರಣದಿಂದ ದೊರೆತಿಲ್ಲ. ದಾಖಲಾತಿಗಳಲ್ಲಿ ದೋಷ ಇರುವುದರಿಂದ ಹಣ ವರ್ಗಾವಣೆ ಆಗಿಲ್ಲ. ಅಂತಹ ಫಲಾನುಭವಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಥವಾ ಅಂಗನವಾಡಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಉಚಿತ ಹೊಲಿಗೆ ಯಂತ್ರ ಯೋಜನೆ, ಆನ್‌ಲೈನ್‌ ಅರ್ಜಿ ಆಹ್ವಾನ

ಸರ್ಕಾರದಿಂದ ವಿದ್ಯಾರ್ಥಿಗಳಿಗೆ 35,000 ರೂ. ಪ್ರೋತ್ಸಾಹಧನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment