IDFC Bank ವಿದ್ಯಾರ್ಥಿವೇತನ 2025, ಅರ್ಜಿ ಸಲ್ಲಿಸಿ | IDFC FIRST Bank Scholarship 2025 Apply Online @idfcfirstbank.com

ಎಲ್ಲರಿಗೂ ನಮಸ್ಕಾರ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದ್ದಾರೆ. IDFC FIRST Bank Scholarship 2025 ವಿದ್ಯಾರ್ಥಿವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎಷ್ಟು ಶಿಷ್ಯವೇತನ ದೊರೆಯಲಿದೆ..? ಹಾಗೂ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ನೀಡಲಾಗಿದೆ‌ ಗಮನಿಸಿ.

ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಅಧ್ಯಯನವನ್ನು ಮುಂದುವರೆಸಲು ಆರ್ಥಿಕ ಸಹಾಯ ಮಾಡುವ ಗುರಿಯನ್ನು ಈ ವಿದ್ಯಾರ್ಥಿವೇತನ ಹೊಂದಿದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ ಸ್ಕಾಲರ್ಶಿಪ್ ನ ಅಡಿಯಲ್ಲಿ, 2025-27ರ ಶೈಕ್ಷಣಿಕ ವರ್ಷದಲ್ಲಿ ಎರಡು ವರ್ಷಗಳ ಪೂರ್ಣ ಅವಧಿಯ ಎಂಬಿಎ ಕೋರ್ಸ್‌ನ ಮೊದಲ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳು ತಮ್ಮ ಎಂಬಿಎ ಕೋರ್ಸ್‌ನ ಎರಡು ವರ್ಷಗಳವರೆಗೆ (ವರ್ಷಕ್ಕೆ 1 ಲಕ್ಷ ರೂ) 2 ಲಕ್ಷ ರೂ. ಗಳನ್ನು ಪಡೆಯುತ್ತಾರೆ. 

IDFC FIRST Bank Scholarship 2025 ಅರ್ಹತೆಗಳು:

  • ಭಾರತೀಯ ಪ್ರಜೆಗಳಿಗೆ ಮಾತ್ರ ಮುಕ್ತವಾಗಿದೆ.
  • ವಿದ್ಯಾರ್ಥಿಗಳು 2 ವರ್ಷಗಳ ಪೂರ್ಣ ಅವಧಿಯ MBA ಕಾರ್ಯಕ್ರಮದ ಮೊದಲ ವರ್ಷ ಅಥವಾ 2027 ರ ತರಗತಿಗೆ ಸಮಾನವಾದ ಕೋರ್ಸ್‌ಗೆ ದಾಖಲಾಗಿರಬೇಕು.
  • ಅರ್ಜಿದಾರರು ಈ ಕೆಳಗೆ ಪಟ್ಟಿ ಮಾಡಲಾದ MBA ಕಾಲೇಜುಗಳಲ್ಲಿ ಒಂದಕ್ಕೆ ದಾಖಲಾಗಿರಬೇಕು .
  • ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯವು 6 ಲಕ್ಷ ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
  • ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.

ಪ್ರಯೋಜನಗಳು:
ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ MBA ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಪೂರ್ಣಾವಧಿ MBA ಅಧ್ಯಯನಕ್ಕಾಗಿ 2,00,000 ರೂ. ವಿದ್ಯಾರ್ಥಿವೇತನ ನೀಡುತ್ತಾರೆ (ವಾರ್ಷಿಕವಾಗಿ1 ಲಕ್ಷ, ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ).

ಅಗತ್ಯ ದಾಖಲೆಗಳು:

  • ಪ್ರವೇಶ ಪುರಾವೆ
  • ಪದವಿ ಅಂಕಪಟ್ಟಿ/ಉತ್ತೀರ್ಣ ಪ್ರಮಾಣಪತ್ರದ ಪ್ರತಿ
  • ಆದಾಯ ಪುರಾವೆ
  • ಇತರೆ ದಾಖಲೆಗಳು

IDFC FIRST Bank MBA Scholarship 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-07-2025

ಪ್ರಮುಖ ಲಿಂಕ್ ಗಳು:
IDFC FIRST Bank Scholarship 2025 ಅರ್ಜಿ ಸಲ್ಲಿಕೆ ಲಿಂಕ್:‌ ಅರ್ಜಿ ಸಲ್ಲಿಸಿ
ಅಧಿಕೃತ ವೆಬ್‌ಸೈಟ್‌: buddy4study.com, www.idfcfirstbank.com

Prize Money Scholarship 2025

Airtel ವಿದ್ಯಾರ್ಥಿವೇತನ 2025, ಅರ್ಜಿ ಸಲ್ಲಿಸಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment