HSRP ನಂಬರ್ ಪ್ಲೇಟ್ ಅಳವಡಿಸಿ, ಇಲ್ಲವೇ ದಂಡ ಗ್ಯಾರಂಟಿ | HSRP Number Plate Karnataka 2024 Apply Online @www.siam.in

ಎಲ್ಲರಿಗೂ ನಮಸ್ಕಾರ, ನೀವು ಕೂಡ HSRP Number Plate ಅಳವಡಿಸಿಲ್ಲವೇ…? ಇನ್ನೂ ಇದೆ ಕಾಲಾವಕಾಶ. ಹಾಗಿದ್ದರೇ ಈ ಲೇಖನವನ್ನು ಓದಿ. ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಕೆ ಬಗ್ಗೆ ಮಾಹಿತಿ ಪಡೆಯಿರಿ.

ಹೌದು.. ವಾಹನಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಇಲಾಖೆಯು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ಪ್ಲೇಟ್‌ (HSRP) ಅಳವಡಿಕೆ ಮಾಡಲು ಸೂಚಿಸಲಾಗಿದೆ.

HSRP Number Plate Karnataka Last Date:

ಇದೇ ಮೇ 31 ರವರೆಗೆ ಅವಕಾಶ ನೀಡಲಾಗಿದೆ. ಜೂ. 1 ರಿಂದ HSRP ಪ್ಲೇಟ್ ಅಳವಡಿಕೆ ಮಾಡದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ತಯಾರಿ ನಡೆಸುತ್ತಿದೆ. ನಿಮ್ಮಲ್ಲಿರುವ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಮಾದರಿಯ ನಂಬರ್‌ ಪ್ಲೇಟ್‌ ಅನ್ನು ಮಾಡಿಸುವುದು ಕಡ್ಡಾಯವಾಗಿದೆ.

ಮೂರು ವರ್ಷದ ಹಿಂದೆಯೇ ಈ ಬಗ್ಗೆ ಆದೇಶವನ್ನು ಜಾರಿ ಮಾಡಿದ್ದರೂ, ಆದರೆ ಕಳೆದ ಒಂದು ವರ್ಷದಲ್ಲಿ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ನೋಂದಣಿ ಮಾಡಿಕೊಳ್ಳುವ ಪ್ರಮಾಣ ಹೆಚ್ಚಿಗೆ ಆಗಿದೆ. ಆದರೂ ಕೂಡ ನಿರೀಕ್ಷಿಸಿದಷ್ಟು ನೋಂದಣಿ ಮಾಡಿಕೊಂಡಿಲ್ಲ. ಅದಕ್ಕಾ ಮೇ 31 ರ ನಂತರ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಲಿದೆ..

ದಂಡ ಎಷ್ಟು?:

ಜೂನ್‌ 1ರ ನಂತರ ಹೆಚ್‌ಎಸ್‌ಆರ್ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಆನಂತರ ಪ್ರತಿ ಬಾರಿಯೂ 1 ಸಾವಿರ ರೂ. ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ಏ. 1 ಕ್ಕೂ ಮೊದಲು ಖರೀದಿಸಿದ ಹಾಗೂ ನೋಂದಣಿಯಾಗಿರುವ ವಾಹನಗಳು 2 ಕೋಟಿಯಷ್ಟಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅವಕಾಶ ನೀಡಲಾಗಿತ್ತು.

ನಂಬರ್ ಪ್ಲೇಟ್‌ಗಳು ವಾಹನಗಳ ಭದ್ರತೆ ಉದ್ದೇಶದಿಂದ ಅಳವಡಿಸಲು ಆದೇಶಿಸಲಾಗಿದೆ. ಪ್ಲೇಟ್‌ನಲ್ಲಿ ಅಶೋಕಚಕ್ರದ ಮುದ್ರೆಯೂ ಇದೆ. ಪ್ಲೇಟ್‌ನ ಕೆಳಗೆ 10 ನಂಬರಿನ ವಿಶಿಷ್ಟ ಗುರುತು ಇದೆ. ಒಮ್ಮೆ ಈ ಪ್ಲೇಟ್ ಅಳವಡಿಸಿದರೆ ಅದನ್ನು ಬಿಚ್ಚಲು ಸಾಧ್ಯವಾಗುವುದಿಲ್ಲ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಈ ನಂಬರ್‌ಪ್ಲೇಟ್ ಸಹಕಾರಿಯಾಗಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

HSRP Number Plate Online Apply:

ಸಾರಿಗೆ ಇಲಾಖೆಯ ಅದೇಶದಂತೆ http://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ಇತರೆ ಮಾಹಿತಿಗಳನ್ನು ಓದಿ

ಹೊಸ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸುವವರಿಗೆ ಗುಡ್‌ ನ್ಯೂಸ್

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

e-Shram Card ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment